ಬೈಂದೂರು : ಪ್ರತಿಫಲ ಫೌಂಡೇಶನ್ ರಿ ಧಾರವಾಡ ಇವರ ಪ್ರಥಮ ವರ್ಷದ ವಾರ್ಷಿಕೋತ್ಸವದಮೇ-09ರಂದು ಆಲೂರು ವೆಂಕಟರಾಮ್ ಸಭಾಭವನ ಧಾರವಾಡದಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ಬೈಂದೂರು ತಾಲೂಕಿನ ಹೆಮ್ಮೆಯ ಅತ್ಯುತ್ತಮ ಕಾರ್ಯಕ್ರಮ ನಿರೂಪಕ ಕಿರಣ್ ಬಿಜೂರು ಇವರಿಗೆ ಯುವ ನಿರೂಪಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಕುಂದಗೋಳ ಭಾಗದ ವಿಜಯ ಕರ್ನಾಟಕ ದಿನ ಪತ್ರಿಕೆಯ ವರದಿಗಾರರಾದ ಶ್ರೀ ಮಂಜುನಾಥ್ ಶಿವಕ್ಕನವರ್, ಪ್ರತಿಫಲ ಫೌಂಡೇಶನ್ ರಿ ಧಾರವಾಡ ಸ್ಥಾಪಕಾಧ್ಯಕ್ಷೆ ಕು|| ಪೂಜಾ ಹನುಮಂತಪ್ಪ ಬಡಿಗೇರ್, ಪ್ರತಿಫಲ ಫೌಂಡೇಶನ್ ರಿ ಧಾರವಾಡ ಸಂಚಾಲಕರು ಹಾಗೂ ಬಿ-ಟಿವಿ ಸುದ್ದಿ ವಾಹಿನಿಯ ಎಡಿಟರ್ ಸಹನಾ ಜಿರ್ ಇದ್ದರು.

