ಬೈಂದೂರು ಮಯ್ಯಾಡಿ ಶ್ರೀ ಧ ಮಂ ಹಿ ಪ್ರಾ ಶಾಲೆಯಲ್ಲಿ ದಿನಾಂಕ 08 04.2026 ರಂದು ಚಿಣ್ಣರ ಬೇಸಿಗೆ ಶಿಬಿರ ನೆರವೇರಿತು. ಶ್ರೀ ಶುಭೋದ ಹಾರ್ವೆ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯೋಪಾಧ್ಯಾಯರಾದ ಶ್ರೀ ರಾಜು ಎಸ್ ಅಧ್ಯಕ್ಷತೆ ವಹಿಸಿದ್ದರು . ಸಂಪನ್ಮೂಲವ್ಯಕ್ತಿಗಳಾಗಿ ನಾಗರಾಜ್ ಪಿ ಯಡ್ತರೆ ಹಾಗೂ ಸುರೇಶ್ ಹುದಾರ್ ಯಡ್ತರೆ ಇವರು ಭಾಗವಹಿಸಿದರು. ಶಿಕ್ಷಕಿ ಸಂಗೀತ ಸರ್ವರನ್ನು ಸ್ವಾಗತಿಸಿದರು ಶಿಕ್ಷಕಿ ಮಾಲತಿ ಧನ್ಯವಾದ ಸಲ್ಲಿಸಿದರು ಶಿಬಿರದ ಸಂಯೋಜಕರಾದ ಉದಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು ಶಾಲಾ ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.



