ಧರ್ಮಸ್ಥಳ ಸಮೀಪದ ಕನ್ಯಾಡಿ ಶ್ರೀರಾಮ ಕ್ಷೇತ್ರದ, ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿ ಸಭೆಯು ದಿನಾಂಕ 24-02-2026ರಂದು ಬೈಂದೂರು ತಾಲೂಕು ಗೋಳಿಹೊಳೆಯಲ್ಲಿ ಜರಗಿತು.
ಸ್ವಾಮೀಜಿಗಳು ಮಾತನಾಡಿ ಚಾತುರ್ಮಾಸ್ಯ ಇದು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆತ್ಮೀಕ ಚಿಂತನೆಗಳೊಂದಿಗೆ ನಡೆಯುವ ಭಕ್ತಿಪೂರ್ಣ ಕಾರ್ಯಕ್ರಮವಾಗಿದೆ.ಧರ್ಮ ಜಾಗೃತಿ,ಆಧ್ಯಾತ್ಮಿಕ ಚಿಂತನೆಗಳು ಮತ್ತು ಪರಿಸರ ಧನಾತ್ಮಕ ಕ್ರಿಯೆಗಳ ಮೂಲಕ ಧರ್ಮ ಜಾಗೃತಿಯನ್ನು ಈ ಅವಧಿಯಲ್ಲಿ ನಡೆಸಲಾಗುತ್ತದೆ.
ಧಾರ್ಮಿಕ ಶಿಸ್ತು, ಜ್ಞಾನಾರ್ಜನೆ ಮತ್ತು ಸಂಪ್ರದಾಯದ ಉಳಿವಿಗೆ ಒತ್ತು ನೀಡಲಾಗುತ್ತದೆ ಎಂದರು.
ಪೂರ್ವ ಭಾವಿ ಸಭೆಯಲ್ಲಿ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ,ಕಾರ್ಕಳ ಶಾಸಕ ಸುನೀಲ್ ಕುಮಾರ್, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಶಿವರಾಜ್ ಪೂಜಾರಿ ಇತರರು ಉಪಸ್ಥಿತರಿದ್ದರು



