ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ದೇವಸ್ಥಾನಗಳ ಆಡಳಿತ ಮುಖ್ಯಸ್ಥರುಗಳ ಸಭೆ ಬೈಂದೂರು ಪೋಲಿಸ್ ಠಾಣೆಯಲ್ಲಿ ನಡೆಯಿತು.ಸದ್ರಿ ಸಭೆಯಲ್ಲಿ ದೇವಸ್ಥಾನದ ಬೆಲೆಬಾಳುವ ಆಭರಣಗಳನ್ನು ಲಾಕರ್ ನ ಭದ್ರತೆ ಯಲ್ಲಿ ಇಡುವುದು, ಕಡ್ಡಾಯವಾಗಿ CC ಕ್ಯಾಮೆರಾ ಮತ್ತು ಸೈರನ್ ಅಳವಡಿಸುವುದು, ದೇವಸ್ಥಾನಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು, ಪ್ರತಿ 15 ದಿನಕ್ಕೊಮ್ಮೆ ಹುಂಡಿಯಲ್ಲಿರುವ ಹಣವನ್ನು ತೆಗೆದು ಲಾಕರಗಳಲ್ಲಿ ಇರಿಸಿಕೊಳ್ಳುವುದು ಹಾಗೂ ಇತರೆ ಸೂಚನೆಗಳನ್ನು ಠಾಣಾಧಿಕಾರಿಯವರು ನೀಡಿದರು.


