ಉಪ್ಪುಂದ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 11 ರಿಂದ ಆರಂಭವಾದ ವರ್ಧಂತಿ ಉತ್ಸವ ಫೆಬ್ರವರಿ 16ರ ತನಕ ಸಾನಿಧ್ಯದಲ್ಲಿ ಜರುಗಲಿದೆ.
ದೇವಳದಲ್ಲಿ ವರ್ಧಂತಿ, ಶತಚಂಡಿಕಾಯಾಗ, ಅತಿರುದ್ರ ಮಹಾಯಾಗ, ಬ್ರಹ್ಮಕಲಶಾಭಿಷೇಕ ಹಾಗೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ನಡೆಯಲಿದೆ. ಶೃಂಗೇರಿ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶತಚಂಡಿಕಾಯಾಗದ ಪೂರ್ಣಾಹುತಿ ಮತ್ತು ಧಾರ್ಮಿಕ ಸಭೆ ನಡೆಯಿತು.


