ಬಿಜೂರು ಮುರ್ಗೋಳಿಹಕ್ಲು ನಂದಿಕೇಶ್ವರ ದೈವಸ್ಥಾನದ ದೇವರ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಭಜನಾ ಸುವರ್ಣ ಮಹೋತ್ಸವದ ಪ್ರಯುಕ್ತ ಸಾನಿಧ್ಯದಲ್ಲಿ ದೈವಿಕತೆಯ ಅಭ್ಯುದಯಕ್ಕಾಗಿ ‘ಕೋಟಿ ಶ್ರೀ ರಾಮ ನಾಮ ಜಪ ಯಜ್ಞ’ಭಕ್ತಾದಿಗಳ ಸಮ್ಮುಖದಲ್ಲಿ ತಾರೀಖು 11-01-2026ನೇ ಭಾನುವಾರ ಬೆಳಿಗ್ಗೆ 10-10’ಕ್ಕೆ ಚಾಲನೆ ದೊರಕಿತು.
ದಿನಾಂಕ 11-01-2026 ರಿಂದ 11-04-2026ರ ತನಕ ಪ್ರತಿನಿತ್ಯ ಶ್ರೀ ರಾಮತಾರಕ ಮಂತ್ರ ಜಪವು ಶ್ರೀ ನಂದಿಕೇಶ್ವರ ಸಬಾಭವನದಲ್ಲಿ ನಡೆಯುತ್ತಿರುತ್ತದೆ ಹಾಗೂ 18-04-2026ರಂದು ಶ್ರೀ ರಾಮ ನಾಮ ಕೋಟಿ ಜಪ ಸಮರ್ಪಣೆಯೊಂದಿಗೆ ಸಂಪನ್ನಗೊಳ್ಳಲಿದೆ.


