ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಯಡ್ತರೆ ಇದರ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಗುರುವಾರ ಜೆ.ಎನ್.ಆರ್ ಯಡ್ತರೆ ಬೈಂದೂರಿನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿ.ಮಾತನಾಡಿ ವರದಿ ವರ್ಷದಲ್ಲಿ ಸಂಘವು ಅಡಿಟ್ ವರ್ಗಿಕರಣದಲ್ಲಿ ಎ ಶ್ರೇಣಿ ಪಡೆದಿದೆ.ವರದಿ ವರ್ಷದಲ್ಲಿ 1067.12 ಕೋಟಿಗೂ ಮೀರಿ ವ್ಯವಹಾರ ನಡೆಸಿದ್ದು ಪ್ರಸಕ್ತ ಸಾಲಿನಲ್ಲಿ ಸಂಘವು ರೂಪಾಯಿ 1.40 ಕೋಟಿ ಲಾಭಗಳಿಸಿದ್ದು ಸದಸ್ಯರಿಗೆ ಶೇ.15% ಡಿವಿಡೆಂಡ್‌ ಘೋಷಣೆ ಮಾಡಲಾಗಿದೆ.ಈಗಾಗಲೇ ಪ್ರಧಾನ ಕಛೇರಿಯ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಶೀಘ್ರ ಉದ್ಘಾಟನೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಿರಿಯ ಪ್ರಗತಿಪರ ಕೃಷಿಕರನ್ನು ಹಾಗೂ ಅತ್ಯುತ್ತಮ ಹೈನುಗಾರರನ್ನು ಸಮ್ಮಾನಿಸಲಾಯಿತು ಹಾಗೂ ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು

ನಿರ್ದೇಶಕರಾದ ಎನ್.ನಾಗರಾಜ ಶೆಟ್ಟಿ,ಚಿಕ್ಕು ಪೂಜಾರಿ ಶಿರೂರು, ಸದಾಶಿವ ಡಿ.ಪಡುವರಿ,ವಸಂತ ಕುಮಾರ್ ಶೆಟ್ಟಿ,ಎಮ್.ಎಚ್.ಗುರುದತ್ತ ಅರುಣ್‌ ಕುಮಾ‌ರ್ ಶಿರೂರು,ಹೆರಿಯ ದೇವಾಡಿಗ,ಸತೀಶ ಯಡ್ತರೆ,ಶಂಕರ ನಾಯ್ಕ,ಜ್ಯೋತಿ,ಎಚ್.ವಿಜಯಾ ಶೇರುಗಾ‌ರ್,ಟಿ.ಬಾಬು ಶೆಟ್ಟಿ,ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading