ಬೈಂದೂರು ಚಾತುರ್ಮಾಸ ಮಹೋತ್ಸವದ ಪೂರ್ವ ಸಿದ್ಧತೆಗಳ ಅಂಗವಾಗಿ, ಶ್ರೀ ಬಿಳಿ ಶಿಲೆ ವಿನಾಯಕ ದೇವಸ್ಥಾನ ಗೋಳಿಹೊಳೆ ಆಶ್ರಯದಲ್ಲಿ ವಿವಿಧ ಗ್ರಾಮ ಸಮಿತಿ ಪ್ರಮುಖರ ಸಭೆಯು ನಾಗರಿನ ಮಹಾಲಸಾ ಕಲ್ಚರಲ್ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಕ್ಷೇತ್ರದ ಶಾಸಕರು ಸರ್ವ ಸಮುದಾಯದ ಹಿರಿಕಿರಿಯ ಮುಖಂಡರು, ವಿವಿಧ ಗ್ರಾಮ ಸಮಿತಿಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಭಾಗವಹಿಸಿ ಮಹೋತ್ಸವದ ಯಶಸ್ವಿ ಆಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಿ ಸಹಕಾರದ ಭರವಸೆ ನೀಡಿದರು.

ಜುಲೈ 29ರಿಂದ ಸೆಪ್ಟೆಂಬರ್ 14ರ ವರೆಗೆ ಬಿಳಿ ಶಿಲೆ ವಿನಾಯಕ ದೇವಸ್ಥಾನ ಗೋಳಿಹೊಳೆ ಬೈಂದೂರಿನಲ್ಲಿ ಚಾತುರ್ಮಾಸ ಮಹೋತ್ಸವ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


