ಶ್ರೀ ವೀರಾಂಜನೇಯ ಫ್ರೆಂಡ್ಸ್ ಮಯ್ಯಾಡಿ ಬೈಂದೂರು ಹಾಗೂ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಜಂಟೀ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟವು ಮೇ 2ರಂದು ನಡೆಯಲಿದ್ದು,ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 8:30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.ರಾತ್ರಿ 9ರಿಂದ ಕಬಡ್ಡಿ ಪಂದ್ಯಾಟ ಆರಂಭಗೊಳ್ಳಲಿದೆ, ಪ್ರಥಮ ಬಹುಮಾನ 20000, ದ್ವಿತೀಯ 10000 ತೃತೀಯ 5000 ಮತ್ತು ಶಾಶ್ವತ ಫಲಕಗಳು
ಹಾಗೂ ವೈಯಕ್ತಿಕ ಬಹುಮಾನಗಳಿವೆ ಎಂದು ವೀರಾಂಜನೇಯ ಫ್ರೆಂಡ್ಸ್ ಮಯ್ಯಾಡಿ ಇದರ ಅಧ್ಯಕ್ಷ ಅಣ್ಣಪ್ಪ ಮಯ್ಯಾಡಿ ತಿಳಿಸಿದ್ದಾರೆ.

