ಬೈಂದೂರು ಗ್ರಾಮದ ಯಡ್ತರೆಯಲ್ಲಿ ನೂತನವಾಗಿ ಆರಂಭಗೊಂಡ ಬೈಂದೂರು ಟೌನ್ ಕ್ರೆಡಿಟ್ ಕೋ ಆಪರೇಟಿವ್(ನಿ) ಯಡ್ತರೆ ಸೊಸೈಟಿ ಇದರ ಪ್ರಥಮ ಶಾಖೆಯು ದಿನಾಂಕ 30-04-2026ರಂದು ಯಡ್ತರೆಯಲ್ಲಿ ಲೋಕಾರ್ಪಣೆಗೊಂಡಿತು
ಈ ಸಂದರ್ಭ ಕಂಬದಕೋಣೆ ರೈತರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಮಾತನಾಡಿ ಸಹಕಾರಿ ಕ್ಷೇತ್ರವು ಜನರ ಆರ್ಥಿಕ ಸಬಲೀಕರಣಕ್ಕೆ ಭದ್ರ ಬುನಾದಿಯಾಗಿದೆ. ಈ ನೂತನ ಸಂಸ್ಥೆಯು ಪ್ರಾಮಾಣಿಕ ಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿ, ಮಹತ್ತರವಾದ ಪ್ರಗತಿ ಸಾಧಿಸಲಿ ಎಂದರು

ಈ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ರೈತ ಸಂಘದ ದೀಪಕ್ ಶೆಟ್ಟಿ,ಉದ್ಯಮಿ ನಾರಾಯಣ ಶೆಟ್ಟಿ ಮಣಿಪಾಲ ಹಾಗೂ ಸೊಸೈಟಿ ಅಧ್ಯಕ್ಷ ರಾಜೇಶ್ ಪೈ, ಉಪಾಧ್ಯಕ್ಷ ನರಸಿಂಹ ನಾಯಕ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಮ ಪೂಜಾರಿ ಸಿ , ನಿರ್ದೇಶಕರಾದ ಐ. ನಾರಾಯಣ, ತಿಯೋದರ ಫೆರ್ನಾಂಡಿಸ್, ವಿಲ್ಸನ್ ಡಯಾಸ್, ಯೋಗೀಶ್ ಭಟ್, ಸುನೀಲ್ ಜಿ. ಪೂಜಾರಿ, ಗಿರೀಶ್ ಮೊಗವೀರ, ದಿನೇಶ್ ಗಾಣಿಗ, ಅನಿಲ್ ಶೇಟ್, ರಾಜಾರಾಮ್ ಪಡಿಯಾರ್, ಸುನಂದ ಗೋಪಾಲ ಗಾಣಿಗ, ಅನುಸೂಯ ಎಸ್.ಇತರರು ಉಪಸ್ಥಿತರಿದ್ದರು


